ಕೊಟ್ಟಿಯೂರು : ಜನದಟ್ಟಣೆಯಿಂದ ಅವ್ಯವಸ್ಥೆ – ಕಣ್ಣೂರು ಡಿಐಜಿ

ಕೇರಳದ ಕೊಟ್ಟಿಯೂರು ಶಿವನ ದೇವಸ್ಥಾನದಲ್ಲಿ ಭಾನುವಾರ ಎಂದಿಗಿಂತ ಹೆಚ್ಚು, ಅಂದರೆ 1.70 ಲಕ್ಷಕ್ಕೂ ಹೆಚ್ಚು ಭಕ್ತರು ಸೇರಿದ್ದರು. ಆದರೆ ಒಂದು ದಿನಕ್ಕೆ 1.25 ಲಕ್ಷ ಭಕ್ತರಿಗಷ್ಟೇ ಅವಕಾಶ ಇರುವುದರಿಂದ ದಟ್ಟಣೆ ಉಂಟಾಯಿತು. ಇದೇ ಮೊದಲ ಬಾರಿಗೆ ಇಷ್ಟೊಂದು ಭಕ್ತರು ಭೇಟಿ ನೀಡಿದ್ದಾರೆ ಎಂದು ಕಣ್ಣೂರು ಡಿಐಜಿ ಯತೀಶ್ಚಂದ್ರ ಹೇಳಿದರು.

ಶನಿವಾರದ ಜನ ದಟ್ಟಣೆ ಯ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದೆ. ಆದರೆ ಭಾನುವಾರಕ್ಕೆ ನಾವು ಆದಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ವಾಹನಗಳಿಗೂ ಸರಿಯಾದ ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೂ ಭಕ್ತರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಹೊರಗಿನಿಂದ ಬಂದವರಿಗೆ ಮಾಹಿತಿಯ ಕೊರತೆಯೂ ಇದೆ. ಹಾಗಾಗಿ ಇವತ್ತಿನಿಂದ ಮೈಕ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವಂತೆ ಸ್ಥಳೀಯರ ಪುಂಡಾಟಿಕೆಯ ವರ್ತನೆಯ ಬಗ್ಗೆ ಮಾತನಾಡಿದರು. ಯಾರಿಗಾದರೂ ತೊಂದರೆಯಾಗಿದ್ದರೆ ದೂರು ನೀಡಬಹುದು. ಅವರು ಯಾರೆಂದು ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
