ಭಾರತ ಹಾಗೂ ಶ್ರೀಲಂಕಾ ಏಕದಿನ ತ್ರಿಕೋನ ಸರಣಿ : ತಂಡವನ್ನು ಗೆಲ್ಲಿಸಿಕೊಟ್ಟ ಬೌಲರ್

ಡಂಬುಲಾದಲ್ಲಿ ನಡೆದ ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವಿನ ಏಕದಿನ ಪಂದ್ಯದಲ್ಲಿ ಭಾರತ ತಂಡವು 8 ರನ್‌ಗಳ ರೋಚಕ ಜಯ ಸಾಧಿಸಿದೆ.

278 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ನಾಯಕ ಸಹನ್ ಅರಾಚಿಗೆ (74) ಅವರ ನೇತೃತ್ವದಲ್ಲಿ ಗೆಲುವಿನ ಸನಿಹಕ್ಕೆ ಬಂದಿತ್ತು. ಕೊನೆಯ 17 ಎಸೆತಗಳಲ್ಲಿ ಗೆಲ್ಲಲು 16 ರನ್ ಸಾಕಿತ್ತು ಮತ್ತು ಕೈಯಲ್ಲಿ 4 ವಿಕೆಟ್‌ಗಳಿದ್ದವು.48ನೇ ಓವರ್‌ನಲ್ಲಿ ನಾಯಕ ಸಹನ್ ಅರಾಚಿಗೆ ಅವರನ್ನು ಅನ್ಶುಲ್ ಕಾಂಬೋಜ್ ಬೌಲ್ಡ್ ಮಾಡುವ ಮೂಲಕ ಪಂದ್ಯದಲ್ಲಿ ಮರುಜೀವ ತುಂಬಿದರು.

49ನೇ ಓವರ್‌ ಎಸೆದ ಅರ್ಷದ್ ಖಾನ್, ಕೇವಲ 4 ಎಸೆತಗಳಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಆ ಓವರ್‌ನಲ್ಲಿ ಒಂದು ವಿಕೆಟ್ (LBW), ಒಂದು ರನೌಟ್ ಮತ್ತು ಐದನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಕಬಳಿಸಿ ಶ್ರೀಲಂಕಾವನ್ನು ಸಂಕಷ್ಟಕ್ಕೆ ತಳ್ಳಿದರು.ಶ್ರೀಲಂಕಾ ತನ್ನ ಕೊನೆಯ 4 ವಿಕೆಟ್‌ಗಳನ್ನು ಕೇವಲ 7 ರನ್‌ಗಳಿಗೆ ಕಳೆದುಕೊಂಡು 269 ರನ್‌ಗಳಿಗೆ ಆಲೌಟ್ ಆಯಿತು.

ಅರ್ಷದ್ ಖಾನ್ ಸೇರಿದಂತೆ ಭಾರತೀಯ ಬೌಲರ್‌ಗಳ ಶಿಸ್ತಿನ ಪ್ರದರ್ಶನದಿಂದಾಗಿ ಭಾರತ ತಂಡವು ಸೋಲುವ ಹಂತದಲ್ಲಿದ್ದ ಪಂದ್ಯವನ್ನು ಅದ್ಭುತವಾಗಿ ಗೆದ್ದುಕೊಂಡಿತು.