ಬಸ್ ಉಚಿತ ಪ್ರಯಾಣ : ಖಾಸಗಿ ಬಸ್ ಮಾಲಕರ ವಿರೋಧ ಹಾಗೂ ಮುಷ್ಕರ
ಕೇರಳ ಆರ್ ಟಿ ಸಿ (KSRTC) ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಸರ್ಕಾರದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರ ಸಂಘವು ಅದನ್ನು ತೀವ್ರವಾಗಿ ವಿರೋಧಿಸಿದೆ. ಈ ನಿರ್ಧಾರದಿಂದಾಗಿ ಖಾಸಗಿ ಬಸ್ ಸೇವೆಯು ನಷ್ಟದಲ್ಲಿದೆ ಎಂದು ತಿಳಿಸಿರುವ ಮಾಲೀಕರು, ಬಜೆಟ್ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಮಹಿಳಾ ಪ್ರಯಾಣಿಕರ ಕೊರತೆಯಿಂದಾಗಿ ಖಾಸಗಿ ಬಸ್ಗಳು ಭಾರಿ ನಷ್ಟವನ್ನು ಎದುರಿಸುತ್ತಿವೆ. ವಿದ್ಯಾರ್ಥಿಗಳ ಪ್ರಯಾಣ ದರವನ್ನು ಕಳೆದ 15 ವರ್ಷಗಳಿಂದ ಹೆಚ್ಚಿಸದಿರುವುದು ಸಮಸ್ಯೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೆಎಸ್ಆರ್ಟಿಸಿಗೆ ನೀಡುವ ಸೌಲಭ್ಯಗಳನ್ನು ಖಾಸಗಿ ಬಸ್ಗಳಿಗೂ ವಿಸ್ತರಿಸಬೇಕು. ಮೀನುಗಾರರಿಗೆ ನೀಡುವಂತೆ ಡೀಸೆಲ್ ಮೇಲೆ ಸಬ್ಸಿಡಿ ನೀಡಬೇಕು ಮತ್ತು ಬಸ್ಗಳ ವಿಮೆಯನ್ನು ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸಿದ್ದಾರೆ. ಜೂನ್ 19ರ ನಂತರ ಬಸ್ ಮಾಲೀಕರ ಜಂಟಿ ಸಭೆ ನಡೆಯಲಿದ್ದು, ಸರ್ಕಾರವು ಬಜೆಟ್ನಲ್ಲಿ ಸೂಕ್ತ ಪ್ಯಾಕೇಜ್ ಘೋಷಿಸದಿದ್ದರೆ ಮುಷ್ಕರವನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
