ಗೋರಕ್ಷಕರ ಪರವಾಗಿ ಕಾನೂನು ಹೋರಾಟ: ನ್ಯಾಯವಾದಿ ಕುಮಾರಗೌಡ ಪಾಟೀಲ್ ಅವರಿಗೆ ಹಾವೇರಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಹರೀಶ್ ಹಾನಗಲ್ಲರಿಂದ ಧನ್ಯವಾದ

ಗೋವಿನ ರಕ್ಷಣೆ ಮಾಡಲು ಹೋದ ಹಿಂದೂ ಜಾಗರಣ ವೇದಿಕೆ ಹಾವೇರಿ ಜಿಲ್ಲೆಯ ಕಾರ್ಯಕರ್ತರ ಮೇಲೆ ಮತಾಂಧ ಶಕ್ತಿಗಳ ರಾಜಕೀಯ ಪ್ರಭಾವದಿಂದ ದಾಖಲಿಸಿದ್ದ ಸುಳ್ಳು ಮೊಕದ್ದಮೆಗೆ ಮಾನ್ಯ ಜಿಲ್ಲಾ ನ್ಯಾಯಾಲಯದಿಂದ ಎಲ್ಲಾ ಕಾರ್ಯಕರ್ತರಿಗೂ ಯಾವುದೇ ಅಪೇಕ್ಷೆ ಇಲ್ಲದೆ ಎಲ್ಲಾ ಕಾರ್ಯಕರ್ತರಿಗೆ ಕಾನೂನಿನ ನೆರವು ನೀಡಿ ಜಾಮೀನು ಮಂಜೂರು ಮಾಡಿಸಿದ ವಕೀಲರಾದ ಶ್ರೀ ಕುಮಾರಗೌಡ ಪಾಟೀಲ್ ನ್ಯಾಯವಾದಿಗಳು ಹೈಕೋರ್ಟ್ ಧಾರವಾಡ ಇವರಿಗೆ ಸಂಘಟನೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಹಾವೇರಿ ಜಿಲ್ಲಾ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಶ್ರೀ ಹರೀಶ್ ಹಾನಗಲ್ಲ ತಿಳಿಸಿದರು

