ಚಿಕ್ಕಮಗಳೂರು : ಹುಡುಗಿ ನಾಪತ್ತೆ ಪ್ರಕರಣ. ಸ್ನೇಹಿತ ಆತ್ಮಹತ್ಯೆ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಕೂಡ್ಲು ಗ್ರಾಮ ದಲ್ಲಿ ಯುವತಿ ಒಬ್ಬಳು ಪ್ರಿಯಕರನೊಂದಿಗೆ ಓಡಿ ಹೋಗಿದ್ದು, ಆಕೆಯ ತಂದೆ ಅವಳ ಸ್ನೇಹಿತನಿಗೆ ಈ ವಿಷಯದಲ್ಲಿ ಬೈದು ವಿಚಾರಿಸಿದ್ದಾರೆ. ಇದರಿಂದ ಮನನೊಂದ ಆಕೆಯ ಸ್ನೇಹಿತ ಚಂದನ್ (20) ಆತ್ಮಹತ್ಯೆಗೆ ಶರಣಾಗಿದ್ದಾನೆ.

ಜೂನ್ 14 ರಂದು ಅದೇ ಗ್ರಾಮದ 18 ವರ್ಷದ ಯುವತಿ ಪತ್ರ ಬರೆದಿಟ್ಟು ತನ್ನ ಪ್ರಿಯಕರನೊಂದಿಗೆ ಹೋಗಿದ್ದಳು. ಆದರೆ ಆಕೆಯ ತಂದೆ ಚಂದನ್ ಗೆ ಇದಕ್ಕೆ ನೀನೆ ಕಾರಣ… ಆಕೆ ಎಲ್ಲಿ ಇದ್ದಾಳೆ ಎಂದು ಹೇಳು ಎಂದು ಜಗಳವಾಡಿದ್ದರು.
ಇದರ ಬಗ್ಗೆ ತನಿಖೆ ಶುರು ಮಾಡಿದ ಬೀರೂರು ಪೊಲೀಸರು ಕಾಲ್ ನ ಆಧಾರದ ಮೇಲೆ ಜೂನ್ 21 ಕ್ಕೆ ಚಂದನ್ ನನ್ನು ಕರೆಸಿ ವಿಚಾರಣೆ ಮಾಡಿ ಕಳುಹಿಸಿದ್ದರು. ಆ ದಿನ ಮನೆಗೆ ಹೋದ ಚಂದನ್ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ಇದರ ಬಗ್ಗೆ ದಲಿತ ಸಂಘಟನೆಗಳು ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡಿದರು. ಹುಡುಗನ ಸಾವಿಗೆ ನ್ಯಾಯ ಸಿಗಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಗನ ಸಾವು ಹಾಗೂ ಹುಡುಗಿಯ ನಾಪತ್ತೆಯ ಬಗ್ಗೆ ವಿಷಯ ಹೊರಬರಬೇಕಿದೆ.
