ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ 5 ನೇ ವಾರ್ಡ್ ನ ರಸ್ತೆ ಉದ್ಘಾಟನೆ

ಮಂಗಳೂರು ವಿಧಾನಸಭಾ ಕ್ಷೇತ್ರದ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ 5ನೇ ವಾರ್ಡ್ ರಸ್ತೆಗೆ ವಾರ್ಡ್ ಕೌನ್ಸಿಲರ್ ಪ್ರವೀಣ್ಬಗಂಬಿಲ ರವರ ಅನುದಾನದಲ್ಲಿ ಬಹುಕಾಲದ ಬೇಡಿಕೆಯಾದ ರಸ್ತೆ ಅಗಲೀಕರಣ ಮತ್ತು ಇಂಟರ್ಲಾಕ್ ಅಳವಡಿಕೆಯಾದ ರಸ್ತೆಯ ಉದ್ಘಾಟನೆಯನ್ನು ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಶ್ರೀ ಜಗದೀಶ್ ಆಳ್ವ ಕುವೆತ್ತಬೈಲ್ ಮತ್ತು
ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸತೀಶ್ ಶೆಟ್ಟಿ ರವರ ಉಪಸ್ಥಿತಿಯಲ್ಲಿ ಸ್ಥಳೀಯ ಹಿರಿಯರಾದ ಹೇಮಾವತಿ ಮತ್ತು ವಾರಿಜ ರವರು ಉದ್ಘಾಟನೆಯನ್ನು ನೆರವೇರಿಸಿದರು.

ಇದೇ ಸಂಧರ್ಭದಲ್ಲಿ ಎಲ್ಲರ ನೆಚ್ಚಿನ ಕೌನ್ಸಿಲರ್ ಪ್ರವೀಣ್ ಬಗಂಬಿಲ ರವರಿಗೆ ನಾಗರಿಕರು ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು , ಮಂಡಲ ಓಬಿಸಿ ಮೋರ್ಚಾ ಉಪಾಧ್ಯಕ್ಷರು ರೂಪಾ ಶೇಖರ್ ಕೋಟೆಕಾರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅತುಲ್ ಬಗಂಬಿಲ, ಕೊಂಡಾಣ ಶಕ್ತಿ ಕೇಂದ್ರ ಪ್ರಮುಖ್ ನಿತಿನ್ ಪೂಜಾರಿ, ಮಾಜಿ ಪಂಚಾಯತ್ ಸದಸ್ಯೆ ಜಲಜಾಕ್ಷಿ, ಬೂತ್ ಅಧ್ಯಕ್ಷರಾದ ರವಿಪ್ರಸಾದ್, ಕಾರ್ಯದರ್ಶಿ ಗಣೇಶ್ ಪೂಜಾರಿ, ಸೂರಜ್, ಪ್ರವೀಣ್ ಕೆಪಿ, ಜಾನ್ ನ್ಯೂಟನ್ ಪ್ರವೀಶ್, ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು