ಅಡೂರು ಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಪಂಜಿನ ಮೆರವಣಿಗೆ ಮುಖಾಂತರ ಬೃಹತ್ ಪ್ರತಿಭಟನೆ. ಹಿಂದೂ ಸಂಘಟನೆಯ ಪ್ರಮುಖರಾದ ಅಕ್ಷಯ್ ರಜಪೂತ್, ಅಭಿಷೇಕ್ ಭಟ್, ಸತ್ಯಶಂಕರ್ ಭಟ್, ಸಂಕಪ್ಪ ಬಿ ಹಾಗೂ ಭರತ್ ಜಿ ಮೇಲೆ ಪ್ರಕರಣ ದಾಖಲು.

ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಾವಚಿತ್ರ ಅಪಕೃತಿ ಮಾಡಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿರುದ್ಧ, ದಿನಾಂಕ 30.05.2026 ರಂದು ರಾತ್ರೆ ಅಡೂರು ಪೇಟೆಯಿಂದ ಬಸ್ ನಿಲ್ದಾಣದವರೆಗೆ ದೊಂದಿ ಮೆರವಣಿಗೆ (ಪಂಜಿನ ಮೆರವಣಿಗೆ) ಮಾಡುವ ಮೂಲಕ ಪ್ರತಿಭಟನೆ. ವಿಶ್ವ ಹಿಂದೂ ಪರಿಷತ್, ಭಜರಂಗದಳ ಅಡೂರು ಘಟಕದ ವತಿಯಿಂದ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಹಸ್ರ ಮಂದಿ ಭಾಗವಹಿಸಿದ ಹಿನ್ನೆಲೆಯಲ್ಲಿ ಆದೂರು ಪೊಲೀಸ್ ಠಾಣೆ ವತಿಯಿಂದ ಪರವಾನಿಗೆ ರಹಿತ ಪ್ರತಿಭಟನೆ ನಡೆಸಿದ್ದಾರೆ ಎಂಬ ಆರೋಪವನ್ನು ಹಾಕಲಾಗಿ ಸುಮೊಟೊ ಕೇಸನ್ನು ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರ ಮೇಲೆ ಹಾಕಲಾಗಿದೆ.

ಕುಂಬ್ಳೆ ಸೀಮೆಯ ದೇವಸ್ಥಾನ ಆಗಿರುವ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಾವಚಿತ್ರವನ್ನು ಅನ್ಯಮತೀಯ ಸಂಘಟನೆ ಆಗಿರುವ SSF ಇದರ ಕಾರ್ಯಕ್ರಮ ಒಂದರ ಪೋಸ್ಟರ್ ಬಳಕೆಗೆ ಉಪಯೋಸಲಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದೆ ಎಂಬ ಆರೋಪದ ಮೇರೆಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ವತಿಯಿಂದ ಈ ಬೃಹತ್ ಪ್ರತಿಭಟನೆ ನಡೆದಿದ್ದು, ಆದೂರು ಪೊಲೀಸ್ ವತಿಯಿಂದ ದಿನಾಂಕ 30.05.2026 ರಂದು FIR 224/2026 ರಂದೇ ಆದೂರು ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ಅಕ್ಷಯ್ ರಜಪೂತ್, ಅಭಿಷೇಕ್ ಭಟ್ ಅಡೂರು, ಸತ್ಯಶಂಕರ ಭಟ್, ಭರತ್ ಅಡೂರು ಹಾಗೂ ಸಂಕಪ್ಪ ಭಂಡಾರಿ ಇವರುಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.